Mankuthimmana Kagga

Way of Fate

153-158

154

ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ ।
ಸಸಿಗೆ ಹೊಸತಳಿರ ತಲೆಯಲಿ ಮುಡಿಸುವಂತೆ ॥
ಹೊಸ ಸೃಷ್ಟಿಸತ್ತ್ವಮೆತ್ತಣಿನೊ ಬರುತನುದಿನಂ ।
ಪೊಸತಾಗಿಪುದು ಜಗವ — ಮಂಕುತಿಮ್ಮ ॥

ಒಂದು ಗಿಡದ ಬೇರಿಗೆ ಹೊಸ ರಸವನ್ನು ಸತ್ವವಾಗಿ ಪೂರೈಸಿ, ಆ ಬೇರಿನ ಗಿಡದಲ್ಲಿ ಹೊಸ ಚಿಗುರನ್ನು ಮೂಡಿಸುವಂತೆ, ಹೊಸ ಸೃಷ್ಟಿಗೆ ಅನುವಾದ ಸತ್ವವು ಎಲ್ಲಿಂದಲೋ ಬಂದು ಈ ಜಗವನೆಲ್ಲ ಹೊಸತಾಗಿಸುತ್ತದೆ, ಎಂದು ಜಗತ್ತಿನಲ್ಲಿ ನಿರಂತರ ನಡೆಯುವ ಹೊಸತನದ ಆನಂದ ನೃತ್ಯವನ್ನು ಬಣ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Drawing new juices from the earth everyday just as the root gives rise to new tendrils newideas and creations arise from somewhere everyday making the world anew.

155

ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು ।
ತುಸಿರಾಗಿ ನಮ್ಮೊಳಾವಗಮಾಡುವಂತೆ ॥
ವಿಸರಸತ್ತ್ವಮದೊಂದದೆತ್ತಣಿನೊ ಬಂದು ನ ।
ಮ್ಮಸುಗಳೊಳವೊಗುತಿಹುದು — ಮಂಕುತಿಮ್ಮ ॥

ನಮ್ಮ ಉಸಿರಾಗಿರುವ ಈ ಗಾಳಿಯು ಆಕಾಶದಿಂದ ಇಳಿದು, ಬೆಟ್ಟಗಳ ಮೇಲೆ ಬೀಸಿ, ಗುಹೆಗಳಲ್ಲಿ ನುಗ್ಗಿ, ಉಸಿರಾಗಿ ನಮ್ಮ ಒಡಲೊಳಗೆ ಆಡುವಂತೆ ಮಾಡುವ, ಒಂದು ವಿಸ್ತಾರ ಸತ್ವವು ಎಲ್ಲಿಂದಲೋ ಬಂದು ನಮ್ಮ ಪ್ರಾಣಗಳ ಒಳಗೆ ನುಗ್ಗುತ್ತಿದೆ ಎಂದು ಪ್ರಸ್ತಾಪಿಸ್ಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

The wind descending from the sky blowing through mountains and caves constantly moves within us as breath. The expansive essence arises from somewhere and constantly mixes with our lives.

156

ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ।
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ॥
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ ।
ಬಾಯ ಚಪ್ಪರಿಸುವನು — ಮಂಕುತಿಮ್ಮ ॥

ಈ ವಿಧಿ ಅನ್ನುವುದು ನಮ್ಮನ್ನು ಈ ಭೂಮಿ ಎನ್ನುವ ಒಲೆಯೊಳು, ನೆನೆಸುತ್ತ, ಬೇಯಿಸುತ, ಹೆಚ್ಚುತ್ತ , ಕೊಚ್ಚುತ್ತ, ಕಾಯಿಸುತ, ಕರಿಯುತ್ತ, ಹುರಿಯುತ್ತ, ಸುಡುತ್ತ, ನಮ್ಮನ್ನು ಆಡಿಸುತ್ತ, ತಾನು ಒಂದು ರುಚಿಯಾದ ಪಕ್ವಾನ್ನವನ್ನು ತಿಂದು ಆಸ್ವಾದಿಸುವನಂತೆ ಬಾಯಿ ಚಪ್ಪರಿಸುತ್ತಿದ್ದಾನೆ ಎಂದು ಒಂದು ಗಹನವಾದ ವಿಷಯವನ್ನು ವಿನೋದವಾಗಿ ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Soaking, cooking, cutting, chopping, heating, frying, roasting, burning —fate cooks our lives in the universe-oven and smacks his lips.

157

ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ ।
ನರಜಾತಿ ಸಾನುಭೂತಿಯ ಕಲಿಯಲೆಂದು ॥
ಪರರೆಂಬರಿಲ್ಲ ಆತ್ಮಾಂಶರೆಲ್ಲರೆನಿತ್ತೆ ।
ಬೆರೆ ನೀನು ವಿಶ್ವದಲಿ — ಮಂಕುತಿಮ್ಮ ॥

ಆ ಪರಬ್ರಹ್ಮನು ಆ “ವಿಧಿ”ಯನ್ನು ಏಕೆ ನೇಮಿಸಿದ್ದಾನೆ ? ಎಂದರೆ, ಮನುಷ್ಯರು ಪರಸ್ಪರ ಸಹಾನುಭೂತಿಯನ್ನು ಕಲಿಯಲಿ ಎಂದು ಮತ್ತು ಪರರು ಯಾರೂ ಇಲ್ಲ, ಎಲ್ಲರೂ ಆತ್ಮದ ಒಂದು ಅಂಶವೆಂದು ಅರಿತು ನೀನೂ ಬೆರೆತು ಈ ವಿಶ್ವದಲಿ ಬಾಳು ಎಂದು ಒಂದು ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Why has brahman appointed fate? To teach humans forbearance? With the feeling of. "There is no outsider" and "Everything forms a part of me," become one with the world.

158

ಕರವೆದಡದೃಷ್ಟಕ್ಕೆ; ನರನ ಪೂರ್ವಿಕವೊಂದು ।
ಪೆರತೊಂದು ನವಸೃಷ್ಟಿಸತ್ತ್ವವಾ ಬೊಗಸೆ ॥
ಧರಿಸಿಹುದು ಮನುಜಜೀವಿತವನದರೊತ್ತಡದೆ ।
ಪರಿದಾಟ ನಮಗೆಲ್ಲ — ಮಂಕುತಿಮ್ಮ ॥

ನಮ್ಮ ಪೂರ್ವಜನ್ಮದ ರೇಖೆಗಳನ್ನು ಹೊತ್ತ ಎಡಗೈ ಮತ್ತು ನಮ್ಮ ಈ ಜನ್ಮದ ಆಗು ಹೋಗುಗಳನ್ನು ಬಿತ್ತರಿಸುವ ನಮ್ಮ ಬಲಗೈಯ ರೇಖೆಗಳು . ಎರಡು ಕೈಗಳು. ಈ ಎರಡೂ ಕೈಗಳನ್ನು ಜೋಡಿಸಿದಾಗ ಒಂದು ಬೊಗಸೆಯಾಗುತ್ತದೆ. ಈ ಬೊಗಸೆಯಿಂದ ನಾವು ಹೊಸ ಹೊಸ ಕೆಲಸವನ್ನು ಮಾಡುತ್ತಾ ಇಲ್ಲಿನ ಒತ್ತಡಗಳನ್ನು ಅನುಭವಿಸುತ್ತಾ ನಾವು ಪರದಾಡುತ್ತಿರುತ್ತೇವೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

We have two hands for luck — One is a part of humans. The other is the essence of new creation. Together they make a handful, sustaining human life with its pressure. Indeed it is a struggle for all of us.